Friday, July 24, 2020

ಸೇತು ಬಂಧ

            -     :     ಸೇತುಬಂಧ.    :-/—-

ಅರ್ಥ :— ಪ್ರಸ್ತುತ ಶೈಕ್ಷಣಿಕ ವರ್ಷದ ಬೋದನಾ ಕಲಿಕಾ ಪ್ರಕ್ರಿಯೆಯಲ್ಲಿ ಮಕ್ಕಳನ್ನು ಅಣಿಗೊಳಿಸುವ ಪ್ರಕ್ರಿಯೆಯೆ ಸೇತುಬಂಧ.ಮಕ್ಕಳು ಹಿಂದಿನ ಶೈಕ್ಷಣಿಕ  ವರ್ಷದಲ್ಲಿ ಕಲಿತಿರುವ ಕಲಿಕಾಂಶಗಳನ್ನು ಪುನರಮನನ ಮಾಡಲು ಹಾಗು ಕಲಿಕಾ ಕೊರತೆಗಳನ್ನು ಪತ್ತೆ ಹಚ್ಚಿ ಸೂಕ್ತ ಪರಿಹಾರ ಬೋದನೆ ಕೈಗೊಂಡು ಮುಂದಿನ ಕಲಿಕಾಂಶಗಳನ್ನು ಕಲಿಯಲು ಪ್ರೇರಣೆ ನೀಡುವ ಪ್ರಕ್ರಿಯೆಯೆ ಸೇತುಬಂಧ 

ಸೇತುಬಂಧ ಪ್ರಕ್ರಿಯೆಯಲ್ಲಿ ಈ ಕೆಳಗಿನ ಹಂತಗಳನ್ನು ಅಶವಡಿಯಲಾಗಿದಮ

1) ಬುನಾದಿ ಸಾಮಾರ್ಥ್ಯಗಳ ಪಟ್ಟಿ ತಯಾರಿಕೆ

2)ಸಾಮಾರ್ಥ್ಯವಾರು ನೈದಾನಿಕ/ ಪೂರ್ವ/ ದೋಷ ನಿದಾನ ಪರಿಕ್ಷೆ ಹಾಗು ಸಾಫಲ್ಯ ಪರಿಕ್ಷೆ ಪ್ರಶ್ನೆ ಪತ್ರಿಕೆ ತಯಾರಿಕೆ

3)ಪೂರ್ವ ಪರಿಕ್ಷೆ  ನಂತರ ಉತ್ತರ ಪತ್ರಿಕೆ ವಿಶ್ಲೇಷಣೆ

4)ಪರಿಹಾರ ಬೋದನೆ ಕ್ರಿಯಾ ಯೋಜನೆ ತಯಾರಿ ಮತ್ತು ಅನುಷ್ಟಾನ

5)ಸಾಫಲ್ಯ ಪರಿಕ್ಷೆ

6)ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಪಟ್ಟಿ ತಯಾರಿಕೆ ಹಾಗು ನಿರಂತರ ಪೂರಕ ಬೋದನೆ 

1)ಬುನಾದಿ ಸಾಮಾರ್ಥ್ಯಗಳ ಪಟ್ಟಿ ತಯಾರಿಕೆ :- ಹಿಂದಿನ ತರಗತಿಯ ಕಲಿಕಾಂಶಗಳನ್ನಾಧರಿಸಿ / ಸಾಮಾರ್ಥ್ಯಗಳನ್ನಾಧರಿಸಿ ಎಲ್ಲಾ ಸಾಮಾರ್ಥ್ಯಗಳನ್ನು ಕ್ರೋಡೀಕರಿಸಿ ಮೂಲ ಸಾಮಾರ್ಥ್ಯಗಳನ್ನು ತಯಾರಿಸಬೇಕು ಈ ಮೂಲ ಸಾಮಾರ್ಥ್ಯಗಳನ್ನು ಭಾಷಾ ವಿಷಯಗಳಿಗೆ ಕೌಶಲ್ಯಾಧಾರಿತ ಹಾಗು ಕೋರ್ ವಿಷಯಗಳಿಗೆ ಪರಿಕಲ್ಪನಾಧಾರಿತ ಸಾಮಾರ್ಥ್ಯಗಳನ್ನು ಸಿದ್ದಪಡಿಸಿಕೊಳ್ಳಬೇಕು

2)ಸಾಮಾರ್ಥ್ಯಾಧಾರಿತ ಪ್ರಶ್ನೆ ಪತ್ರಿಕೆಗಳ ತಯಾರಿ:—
     ಪ್ರತಿಯೊಂದು ಸಾಮಾರ್ಥ್ಯವು ಮಕ್ಕಳಲ್ಲಿ ಅಭಿವೃದ್ದಿ ಹೊಂದಿದೆಯೆ ಎಂಬುದನ್ನು ತಿಳಿಯಲು ಪ್ರತಿ ಸಾಮಾರ್ಥ್ಯಕ್ಕೆ 1/2/3 ಪ್ರಶ್ನೆಗಳನ್ನು ತೆಗೆಯಬೇಕು ಪ್ರಶ್ನೆಗಳ ಸಂಖ್ಯೆಗೆ ಮಿತಿಯಿರುವುದಿಲ್ಲ ಸಾಮಾರ್ಥ್ಯವನ್ನಾಧರಿಸಿ ಶಾಲೆಯಿಂದ ಶಾಲೆಗೆ ಶಿಕ್ಷಕರಿಂದ ಶಿಕ್ಷಕರಿಗೆ ಪ್ರಶ್ನೆಗಳ ಸಂಖ್ಯೆಯಲ್ಲಿ ವ್ಯತ್ಯಾಸವಿರುತ್ತದೆ

3)ಪೂರ್ವ ಪರೀಕ್ಷೆ ಉತ್ತರ ವಿಶ್ಲೇಷಣೆ:-/
      ಮಕ್ಕಳು ಉತ್ತರಿಸಿದ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡುವಾಗ ಪ್ರಶ್ನೆಗಳ ಪ್ರಕಾರ ಮಾಡದೇ ಸಾಮಾರ್ಥ್ಯಗಳ ಪ್ರಕಾರ ಮಾಡಿ ಸಾಮಾರ್ಥ್ಯ ಗಳಿಸಿದ್ದರೆ “A” ಎಂದು ಸಾಮಾರ್ಥ್ಯ ಗಳಿಸದಿದ್ದರೆ “B”ಎಂದು ನಮೂಧಿಸಬೇಕು. ನಂತರ ನಿಗದಿತ ನಮೂನೆಯಲ್ಲಿ ವಿಶ್ಲೇಷಣೆಗೆ ಒಳಪಡಿಸಬೇಕು
         -   :    ನಮೂನೆ.  :  -
ಕ್ರ.ಸಂ/ಮಕ್ಕಳ ಹೆಸರು/ಸಾಮಾರ್ಛ್ಯಗಳ ಸಂಖ್ಯೆ/ಒಟ್ಟು
          /                      / 123456......,,10.       /A/B
4)ಪರಿಹಾರ ಬೋದನೆ ಕ್ರಿಯಾಯೋಜವೆ ತಯಾರಿ
  ನಿಗಧಿತ ನಮೂನೆಯಲ್ಲಿ ಸಿದ್ದಪಡಿಸಬೇಕು
ಕ್ರ.ಸಂ/ಸಾಮಾರ್ಥ್ಯ ಸಂಖ್ಯೆ/ ಚಟುವಟಿಕೆ ವಿವರ/ ಅವಧಿ/ TLM/ ತಂತ್ರ/ ಸಾಧನ/

ನಂತರ ಪರಿಹಾರ ಬೋದನೆ ಕೈಗೊಂಡು ಸಾಫಲ್ಯ ಪರೀಕ್ಷೆ ಮಾಡಿ ನಿರಂತರ ಪೂರಕ ಬೋದನೆ ನಡೆಸಬೇಕು